15 May

CML LEADERSHIP CAMP

ಧರ್ಮಪ್ರಾಂತ್ಯದ ಪಾಲನಾ ಕೇಂದ್ರದಲ್ಲಿ  ಪ್ರೌಢ ಶಾಲಾ ಮಕ್ಕಳಿಗಾಗಿ ನಾಯಕತ್ವ ತರಬೇತಿ ಶಿಬಿರ
 ಬೆಳ್ತಂಗಡಿ : ಉತ್ತಮ ನಾಯಕತ್ವ, ಉತ್ತಮ ಪ್ರಜೆಗಳಿಗಾಗಿ ತರಬೇತಿ ಶಿಬಿರ 
ಬೆಳ್ತಂಗಡಿ ಧರ್ಮಪ್ರಾಂತ್ಯದ ಪಾಲನಾ ಕೇಂದ್ರದಲ್ಲಿ ಮೂರು ದಿನಗಳ ಪ್ರೌಢ ಶಾಲಾ ಮಕ್ಕಳಿಗಾಗಿ ನಾಯಕತ್ವ ತರಬೇತಿ ಶಿಬಿರ ಇಂದು ಆರಂಬಗೊಂಡಿದೆ. ಶಿಬಿರವನ್ನು ಉದ್ಘಾಸಿ  ಮಾತನಾಡಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸ್ಲರ್ ಫಾ. ಲಾರೆನ್ಸ್ ಪೋನೋಲಿಲ್ ರವರು, "ಸಮಾಜದಲ್ಲಿ ಉತ್ತಮ ನಾಯಕತ್ವ ಗುಣಗಳು ಇರುವವರು ಸಾಮಾಜ ಸೇವೆಗೆ ಮುಂದಾಗ ಬೇಕಿದೆ, ಆ ನಿಟ್ಟಿನಲ್ಲಿ ನಡೆಸಲಾಗುವ ಈ ಶಿಬಿರವು ಸಮಾಜಕ್ಕೆ ಒಳಿತಾಗಲಿ" ಎಂದು ಹಾರೈಸಿದರು. ಕೇರಳದಿಂದ ಪರಿಣಿತ ತಂಡವು ಶಿಬಿರವನ್ನು ನಡೆಸಲಿದ್ದಾರೆ.